Skip to main content

ಅಂದು ಮತ್ತು ಇಂದು .

ಒಂದು ವರ್ಷ ಆಯ್ತು ಮನೆಯಿಂದ ದೂರ  ಇದ್ದು. ಒಂದು ವರ್ಷದೊಳಗೆ ಹಲವಾರು ರೀತಿಯ ಜನರನ್ನು ಭೇಟಿಯಾದರೂ , ಬೇರೆ ಬೇರೆ ಸಂಸ್ಕೃತಿಯ ಪರಿಚಯವಾದರೂ ನಾವು ಹುಟ್ಟಿ ಬೆಳೆದ  ಊರಿನ  ಬದುಕಿನ ಶೈಲಿ, ಅಲ್ಲಿನ ಸಂಸ್ಕೃತಿಯೇ ನಮಗೆ ಶ್ರೇಷ್ಠವೆನಿಸುತ್ತದೆ. ಮನೆಯಲ್ಲಿ ಇರ್ಬೇಕಿದ್ರೆ ಅಮ್ಮ ಉಪ್ಪಿಟ್ಟು ಮಾಡಿದರೆ ಅಯ್ಯೋ ಉಪ್ಪಿಟ್ಟಾ ಎಂದು, ದೋಸೆ ಮಾಡಿದರೆ ದಿನಾಲು ದೋಸೆ ಯಾಕಮ್ಮ ನಿನ್ನೆ  ತಾನೇ ಮಾಡಿದ್ರಿ ಎಂದು ಅಮ್ಮನ ಮೇಲೆ ರೇಗಿಬಿಡುವುದು ರೂಢಿಯಾಗಿತ್ತು. ಸೌತೆಕಾಯಿ ಪಲ್ಯವಾದರೆ ಹಸಿವಿಲ್ಲ ಎಂದು ಹಸಿವಲ್ಲೇ ಮಲಗಿಬಿಡುವುದೂ ಇತ್ತು. ಆದರೆ ಇಂದು
ಬೆಳಗ್ಗಿನಿಂದ ರಾತ್ರಿಯವರೆಗೂ ಮೂರುಹೊತ್ತೂ ರೋಟಿ-ದಾಲ್ ತಿಂದರೂ ಬೇಸರವಿಲ್ಲ. ಬೇಸರವಿಲ್ಲ ಎನ್ನುವುದಕ್ಕಿಂತ ಅದಕ್ಕೆ ಒಗ್ಗಿಕೊಂಡುಬಿಟ್ಟಿದೇನೆ ಎಂದರೆ ಸರಿಯಾದೀತು. ಈಗ ಮನೆಗೆ ಹೋದರೆ ಅಮ್ಮ ಗಂಜಿ ಊಟ ಬಡಿಸಿದರೂ ಹಬ್ಬದೂಟ ತಿಂದಷ್ಟು ತೃಪ್ತಿ.

ಏಳಲು ಅಲಾರ್ಮ್ ಬೇಕಿರಲಿಲ್ಲ, ಹಕ್ಕಿಗಳ ಇಂಚರಕ್ಕೆ ಅಮ್ಮ ಎದ್ದರೆ, ಅಮ್ಮನ ಧ್ವನಿಗೆ ಮಕ್ಕಳೆಲ್ಲಾ ಎದ್ದು ಬಿಡುತಿದ್ವಿ. ಎದ್ದು ಹೋಗಿ ಮನೆ ಹೊರಗೆ ಜಗಲಿಯಲ್ಲಿ ಕೂತು ಸೂರ್ಯೋದಯ, ಗದ್ದೆಯಲ್ಲಿ ಭತ್ತದ ತೆನೆ, ಅಂಗಳದಲ್ಲಿ ಅರಳಿ ನಿಂತ ಹೂವು, ಗದ್ದೆಯ ಬದಿಯಿಂದ ಸಾಲಾಗಿ ಹೋಗುತ್ತಿರುವ ನವಿಲುಗಳನ್ನು ನೋಡ್ಕೊಂಡು  ಕುಳಿತುಕೊಳ್ಳುವದು ದಿನಚರಿ. ಹಾಗೆ ಕುಳಿತುಕೊಂಡರೆ ಮತ್ತೆ ಏಳುವುದು 'ಕಾಲೇಜಿಗೆ ನಂಗೆ ಹೋಗ್ಲಿಕ್ಕಾ  ಅಲ್ಲಾ  ನಿನಗ  , ಹೊರಡುವ ಯೋಚನೆ ಇಲ್ವಾ' ಎಂದು ಅಮ್ಮ  ಬೈದಾಗ್ಲೇ . ಈಗ ಎಚ್ಚರ ಆಗುವದು ಅಡಿಗೆಯವರು ಬೆಲ್ ಹೊಡೆದಾಗ್ಲೇ ಇಲ್ವೇ ಮೊಬೈಲ್ ಅಲಾರ್ಮ್ ಹೊಡೆದಾಗ್ಲೇ. ಎದ್ದು  ಹೊರಗೆ ನೋಡಿದರೆ  ಮನೆ ಕಂಪೌಂಡ್, ಪಕ್ಕದ ಮನೆಯ ಗೋಡೆ ಹಾಗು ಅಲ್ಲಿ ನಿಂತ ವಾಹನಗಳನ್ನು ಬಿಟ್ರೆ ಇನ್ನೇನಿಲ್ಲ .

ಅಂದು
ಇಂದು


ಕಾಲೇಜಿಗೆ ಹೋಗ್ಬೇಕಿದ್ರೆ ಬಸ್ಸು ಬರಲು ಹತ್ತು ನಿಮಿಷ ಇರುವಾಗ ರೆಡಿಯಾಗುತ್ತಿದ್ದಂತೆ ಮಧ್ಯದಲ್ಲಿ ಅಣ್ಣ ತಂಗಿಯೊಡನೆ ಏನಾದರೊಂದು ಕಾರಣಕ್ಕೆ ವಾದ ವಿವಾದವಾಗಿ ಬಸ್ಸಿಗೆ ಎರಡು ನಿಮಿಷ ಇರುವಾಗ ಮನೆಯಿಂದ ಓಡಿಬಿಡುತಿದ್ದೆ. ಓಡಿ ಹೋಗಿ ಬಸ್ ಹತ್ತಿ ಸುಸ್ತಾದ್ರೂ, ಬಸ್ಸಲ್ಲಿದ್ದ ಹಲವಾರು ಪರಿಚಯ ಮುಖಗಳನ್ನು ನೋಡಿ ಪರಿಚಯದ ನಗೆ ಬೀರಿ ಸೀಟಲ್ಲಿ ಕೂತು ಪಕ್ಕದಲ್ಲಿ ಕೂತವರೊಡನೆ ಮಾತಿಗಿಳಿದರೆ ಇಳಿಯುವ ಸ್ಟಾಪ್ ಬಂದಾಗಲೇ ಮಾತು ಸ್ಟಾಪ್ ಆಗುತಿದದ್ದು. ಆದರೆ ಇವತ್ತು ಮನೆಯಿಂದ ಹೊರಡ್ಬೇಕಿದ್ರೆ ವಾಯು ಮಾಲಿನ್ಯದಿಂದ ಮುಖಕ್ಕೆ ಏನಾದರೂ ಆಗ್ಬಹುದು ಎಂಬ ಭಯದಿಂದ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ಹೋದರೆ ಬಸ್ಸಿನಲ್ಲಿ ಇರುವ ಎಲ್ಲಾ ಹುಡಿಗಿಯರ ಕಣ್ಣು ಮಾತ್ರ ಕಾಣುತ್ತಿರುತ್ತದೆ. ಆಫೀಸಿನಲ್ಲಿ ಬದಿಯಲ್ಲೇ ಕೂರುವ ಹುಡುಗಿಯಿದ್ದರೂ ಪರಿಚಯವಾಗುವುದಿಲ್ಲ. ಆಫೀಸ್ ತಲುಪುವ ತನಕ ಮಾತಿಲ್ಲ ಕತೆಯಿಲ್ಲ. ಮೊಬೈಲ್ ಹಿಡ್ಕೊಂಡು ಎಲ್ಲರೂ ಅವರವರ ಲೋಕದಲ್ಲೇ ಮಗ್ನರಾಗಿಬಿಡುತ್ತಾರೆ. ಊರಲ್ಲಿ ಬಸ್ಸಲ್ಲಿ ಹೋಗ್ಬೇಕಿದ್ರೆ ಕಂಡಕ್ಟರ್  'ಪಡುಬಿದ್ರೆ, ಎರ್ಮಾಳ್ ಉಚ್ಚಿಲ ಕಾಪು ಕಟಪಾಡಿ ಉದ್ಯಾವರ ಉಡುಪಿ ಉಡುಪಿ ಉಡುಪಿ' ಎಂದು ಕಿವಿ ಬದಿಯಲ್ಲೇ  ಒಂದೇ ಉಸಿರಲ್ಲಿ ಅರಚುತ್ತಿರುತ್ತಾರೆ. ಪ್ರಯಾಣದುದ್ದಕ್ಕೂ ಅವ ಹೇಳದಿದ್ದರೂ ನಮ್ಮ ತಲೆಯಲ್ಲಿ ಅದೇ ಪ್ರತಿಧ್ವನಿಸುತ್ತಿತ್ತು. ಇಂದು ಹಾರ್ನ್ಒಂದು ಬಿಟ್ಟು ಏನು ಕೇಳಿಸುವುದಿಲ್ಲ.

ಸಂಜೆ ಮನೆಗೆ ತಲುಪಿದ ಕೂಡಲೇ ಅಂಗಳದಲ್ಲೇ ನಿಂತ್ಕೊಂಡು ಅಮ್ಮ ಎಂದು ಕರೆಯುತ್ತಾ, ಅವರು ಕಾಣದಿದ್ದಾಗ ಮನೆಗೆ ಎರಡು ಸುತ್ತು ಹಾಕಿದ್ದೂ ಉಂಟು. ಮನೆಗೆ ತಲುಪಿದೊಡನೆ ಅಮ್ಮನ ಮುಖ ನೋಡಿದರೆ ಏನೋ ಒಂದು ರೀತಿಯ ಸಮಾಧಾನ ಹಾಗೂ ಅಂಗಳದಲ್ಲೇ ಇದ್ದುಕೊಂಡು ಬ್ಯಾಗೂ ಕೆಳಗಿಡದೆ ಇಂದು  ಅಡಿಗೆ ಏನು ಮಾಡಿದ್ದೀರಾ ಎಂದು ಕೇಳಿ ಮನೆಯೊಳಗೇ ಹೋಗುತ್ತಿದ್ವಿ. ಅದೇ ಈಗ ಸಂಜೆ ಮನೆಗೆ ತಲುಪಿದಂತೆ ಕೋಣೆ ಬಾಗಿಲು ಮುಚ್ಕೊಂಡು ಮೊಬೈಲ್, ಲ್ಯಾಪ್ಟಾಪ್ ಹಿಡಿದು  ಕೂತರೆ ರಾತ್ರಿ ಹಸಿವಾದಾಗ ಹೋಗಿ ಅಡಿಗೆಯವರು ಮಾಡಿಟ್ಟಿದ್ದನ್ನು ತಿಂದು ಮಲಗಿಬಿಡುತ್ತೇನೆ. ಉಪ್ಪು ಕಮ್ಮಿಯಾದ್ರು ಸೇರುತ್ತದೆ, ಖಾರ ಜಾಸ್ತಿಯಾದ್ರು ಸೇರುತ್ತದೆ.

ಹೀಗೆ ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವ ತನಕದ ದಿನಚರಿಯೇ ಬದಲಾಗಿಬಿಟ್ಟಿದೆ. ಎಲ್ಲೊ ಏನೋ ನನ್ನನ್ನೇ ನಾನು ಕಳೆದು ಕೊಂಡಿದ್ದೇನೋ ಏನೋ ಎಣಿಸುತ್ತಿದಂತೆ, ನೆನಪಾದದ್ದು ಅಪ್ಪನನ್ನು. ಕೆಲಸದ ನಿಮಿತ್ತ, ಚಿಕ್ಕ ವಯಸ್ಸಲ್ಲೇ ಪರ ಊರಿಗೆ ಹೋಗಿದ್ರು. ಈಗ ನಮಗೆ ಅಪ್ಪ ಅಮ್ಮ ನನ್ನು ಎಣಿಸಿದ್ರು ಎಲ್ಲೇ ಇದ್ದರು ಫೋನ್ ಮಾಡಿ ಮಾತಾಡಿಸಬಹುದು. ಆದರೆ ಮುಂಚೆ ಅಷ್ಟೊಂದು ಸೌಕರ್ಯಗಳು ಇಲ್ಲದ ಕಾರಣ ಅವರು ಮನೆಗೆ ಫೋನ್ ಮಾಡಿ  ಮಾತಾಡಿಸುತಿದ್ದದ್ದು ವಾರಕೊಮ್ಮೆ. ವರ್ಷಕೊಮ್ಮೆ ಊರಿಗೆ ಬರುತ್ತಿದ್ರು. ಒಂದು ವರ್ಷದೊಳಗೆ ಅಮ್ಮ ಇಲ್ಲಿ ಅದು ಸರಿ ಇಲ್ಲ , ಅಪ್ಪ ಇದು ಸರಿ ಇಲ್ಲ ಎಂದು ಅವರೊಡನೆ ಎಷ್ಟು ಸಲ ದೂರಿತ್ತಿದೆನೋ ಲೆಕ್ಕವಿಲ್ಲ. ಪರಊರಿಗೆ ಹೋಗಿ ಇಂದಿಗೆ ನಲವತ್ತು ವರ್ಷಗಳಿಂದ ಮೇಲಾದ್ರು  ಅಪ್ಪನ ಬಾಯಿಂದ ಒಂದು ದೂರು ಕೇಳಲಿಲ್ಲ. ತಮ್ಮ ಕುಟುಂಬವನ್ನು ಸಾಕುವ ಜವಾಬ್ದಾರಿಯತ್ತ ಅವರಿಗಿರುವ ಲಕ್ಷ್ಯವೇ ಅವರನ್ನು ಪ್ರೇರಣಿಸುತ್ತಿರಬೇಕು. ಹೀಗೆ ದಿನಚರಿಯಲ್ಲಿ ಆದ ಬದಲಾವಣೆಗಳನ್ನು ಎಣಿಸುವಾಗ "ಒಂದನ್ನು ಪಡೆಯಬೇಕಿದ್ರೆ ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆಂ" ಎಂಬ ಮಾತು ನೆನಪಾಗುತ್ತದೆ.

                                                                                                                     - ಸುಪ್ರೀತಾ

Comments

  1. Idhu neevu barrdudaralli nanna necchina lekhana!!Hindina nenapugalannu hasiyagisidiri! Dhanyavadagalu 😄

    ReplyDelete
  2. its soo true... evry word of it s a xperience... vry gud1... suprb.. keep goin

    ReplyDelete

Post a Comment

Popular posts from this blog

ಕ್ಷಮಿಸಿ ಟೀಚರ್ ...!

ಆವತ್ತು ಎಂದಿನಂತೆ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅದು ಯಾವತ್ತೂ ಮರೆಯದ ದಿನವಾಗುತ್ತದೆಂದು ಕನಸಲ್ಲೂ ಎಣಿಸಿರಲಿಲ್ಲ . ತಪ್ಪು ಎನ್ನುವುದಕ್ಕಿಂತ ಏನೋ ಪಾಪ ಮಾಡಿದ್ದೇನೆ ಎಂಬ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ. ನನ್ಮುಂದೆ ಬಸ್ಸೊಂದು ನಿಂತಿತ್ತು. ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿರುವುದೆಂದು ಬಸ್ಸು ನೋಡಿದಾಗ  ತಿಳಿಯಿತು. ನಾನೋ ಇದನೆಲ್ಲ ನೋಡುತಿದ್ದರು ನನ್ನ ಮನಸ್ಸು ಏನೋ ಬೇರೆ ಕಡೆಯೇ ತೇಲಿದಂತ ಅನುಭವ. ಆ ಬಸ್ಸಿನ ಕಿಟಕಿಯಿಂದ  ಸುಮಾರು ಇಪ್ಪತೆಂಟು ಮೂವತ್ತು ವರ್ಷದ ಹುಡುಗಿಯೊಬ್ಬಳು ನನ್ನ ಕಡೆ ನೋಡಿ ಕೈ ಬೀಸಿದಂತೆ ಆಯ್ತು. ಆದರೆ ಯಾರೆಂಬುದು ನನಗೆ ತಿಳಿಯಲೇ ಇಲ್ಲ. ನನ್ನ ನೋಡಿ ಕೈ ಬೀಸಿದಳೋ ಅಲ್ಲ ಪಕ್ಕದಲ್ಲಿರುವವರಿಗೆ ಸನ್ನೆ ಮಾಡುತಿದ್ದಳೊ ತಿಳಿಯಲಿಲ್ಲ.ಆಚೆ ಈಚೆ ನೋಡಿದರೆ ಯಾರು ಅವಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಮತ್ತೆ ಅವಳು ನನ್ನನ್ನೇ ನೋಡ್ತಿದಂತೆ ಅನಿಸಿತು. ಏನು ಯೋಚಿಸುತಿದ್ದೆನೋ ದೇವರಿಗೆ ಗೊತ್ತು. ನಾನು ಅವಳಿಗೆ ಪ್ರತಿಕ್ರಿಯಿಸಲೇ  ಇಲ್ಲ. ನಾನು ಅವಳಿಗೆ ಕೈ ಬೀಸುತಿದ್ದರೆ  ನನ್ನ ಗಂಟೇನು  ಹೋಗುತಿತ್ತು ಎಂದು ಇವತ್ತಿನವರೆಗೂ  ನನ್ನನು ನಾನು ಎಷ್ಟು ಬಾರಿ ಬೈದುಕೊಂಡಿದ್ದೇನೋ ಏನೋ. ಸ್ವಲ್ಪ ಹೊತ್ತಾದ ನಂತರ ಯಾರೋ ಬಸ್ಸಿನಿಂದ ಇಳಿದಂತಾಯ್ತು.  ಇಳಿದವಳನ್ನು ನೋಡಿ ಅವಾಕ್ಕಾದೆ . ನಾನು ಕಲಿತ ಶಾಲೆಯಲ್ಲೇ ನನ್ನ ಕಸಿನ್ ಓದುತ್ತಿದ್ದಳು . ಅವಳು ಬಸ್ಸಿನಿಂದ ಇಳಿದಂತೆ ಕಿಟಕಿ ಬದಿಯಲ್ಲಿದ್ದ

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್                       ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.  ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂ

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. " ಹೆಂಗಸು ೨: "ಏನೋ ಅವ