ಮಹಿಳಾ ದಿನಾಚರಣೆ !
ವಾಟ್ಸಪ್ಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಎಲ್ಲಿ ನೋಡಿದರು ಹೆಣ್ಣಿನ ಜೀವನ, ಅವಳ ತ್ಯಾಗ, ತಾಳ್ಮೆ, ನೋವಿನ ಬಗ್ಗೆಯೇ ತುಂಬಿ ತುಳುಕುತ್ತಿದೆ. ವಿಶ್ ಮಾಡಿದವರಿಗೆ ರಿಪ್ಲೈ ಮಾಡಿ, ಮಹಿಳಾ ದಿನಾಚರಣೆ ಆಚರಿಸುವುದು ಸರಿಯೋ ತಪ್ಪೋ ಎಂದು ಮನದಲ್ಲೇ ಚರ್ಚಿಸುತ್ತ ಆಫೀಸಿಗೆಂದು ಹೊರಟೆ. ಆಫೀಸ್ ಗೇಟ್ ಅಲ್ಲಿ ಸೆಕ್ಯೂರಿಟಿ ಗಾರ್ಡ್ಸ್ ಮುಗುಳ್ನಗುತ್ತ "ಹ್ಯಾಪಿ ವುಮೆನ್ಸ್ ಡೇ" ಎಂದು ವಿಶ್ ಮಾಡಿ ಒಂದು ಬ್ಯಾಡ್ಜ್ ಕೈಗಿತ್ತರು. ಒಂದು ಕಡೆಯಲ್ಲಿ ಹೆಣ್ಣಿನ ಚಿತ್ರವಿದ್ದರೆ ಇನ್ನೊಂದು ಕಡೆಯಲ್ಲಿ "ಎಮರ್ಜೆನ್ಸಿ ಕಾಂಟ್ಯಾಕ್ಟ್ಸ್ " ಇದ್ವು. ಅದು ಮಹಿಳಾ ದಿನಾಚರಣೆಗೆ ಸಿಕ್ಕಿದ ಗಿಫ್ಟ್ ಆಗಿತ್ತು. ಅಯ್ಯೋ ಇಷ್ಟೇನಾ ಎಂದುಕೊಂಡೆ, ಆದರು ಎಲ್ಲೊ ಮನದಲ್ಲಿ ಇದೆ ಇಂದಿನ ದಿನಗಳಲ್ಲಿ ಬಲು ಅವಶ್ಯವಾದದು ಎಂದೆನಿಸಿತು.
ಒಂದು ಕೋಣೆಯಲ್ಲಿ ಒಬ್ಬಳು ಇರಲು ಹೆದರುತ್ತಿದ್ದವಳು ನಾನು. ಎಲ್ಲಿ ಕರೆಂಟ್ ಹೋಗಿ ಕತ್ತಲೆ ಯಲ್ಲಿ ಭೂತ ಕಾಣಿಸುವುದೋ ಎಂಬ ಭಯ. ಇನ್ನೊಂದು ಕೋಣೆ ಯ ದೀಪ ಆರಿಸಿ ಬಾ ಎಂದು ಅಮ್ಮ ಹೇಳಿದರೆ ನನ್ನಿಂದ ಆಗದು ಎನ್ನುತ್ತಿದ್ದೆ. ಆದರೆ ಇಂದು ಜನರಿಂದ ತುಂಬಿ ತುಳುಕುತ್ತಿರುವ ಜಾಗದಲ್ಲಿದ್ದರು ಹಗಲಲ್ಲೂ ಹೆದರಿಕೆ. ಭೂತದಲ್ಲ ಮನುಷ್ಯರದು. ಮುಂಚೆ ರಸ್ತೆ ದಾಟುವಾಗ ಜಾಗೃತೆ ಎಂದು ಹೇಳಿ ಕಳುಹಿಸುತ್ತಿದ್ದರು ಅಮ್ಮ , ಇಂದು ರೋಡ್ ದಾಟಿ ಅಪಾರ್ಟ್ಮೆಂಟ್ ಗೇಟ್ ಒಳಗಿದ್ದೇನೆ ಎಂದರು ಅಮ್ಮ, ಮನೆ ತಲುಪಿದ ಕೂಡಲೇ ಕಾಲ್ ಮಾಡು ಎನ್ನುವರು. ದಾರಿಯಲ್ಲಿ ಯಾವ ಕಾಮ ಪಿಶಾಚಿ ಯ ಕೈಗೆ ತನ್ನ ಮಗಳು ಬಲಿಯಾಗುವಳೋ ಎಂಬ ಭಯ ಎಲ್ಲ ಹೆತ್ತವರಿಗೆ ಕಾಡುತ್ತಿದೆ. ದಿನಪತ್ರಿಕೆ ತೆರೆದರೆ ಅತ್ಯಾಚಾರಗಳ ಸುದ್ದಿಗಳೇ ತುಂಬಿ ಹೋಗಿದೆ. ಒಂದು ತಿಂಗಳ ಮಗುವಿನಿಂದ ಹಿಡಿದು ತೊಂಬತ್ತು ವರ್ಷದ ಮುದುಕಿಯ ಮೇಲು ಇಂದು ದೌರ್ಜನ್ಯ ನಡೆಯುತ್ತಿದೆ. ಯಾವ ಹೆಣ್ಣನ್ನು ಕೇಳಿದರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಿರುಕಳವನ್ನು ಅನುಭವಿಸಿರುವುದು ಕಟು ಸತ್ಯ.
ಇಂತಹ ಒಂದು ಅನುಭವ ಒಂದು ವರ್ಷದ ಹಿಂದೆ ನಡೆದಿದ್ದರೂ ಇಂದೂ ಹಚ್ಚ ಹೆಸರಾಗಿಯೇ ಮನದಲ್ಲಿ ನೆಲೆಯಾಗಿದೆ. ಪುಣೆ ಗೆ ಬಂದ ಮೊದಲ ವಾರವಾಗಿತ್ತು. ಗೆಳತಿಯ ಸಂಭಂದಿಕರೊಬ್ಬರನ್ನು ಭೇಟಿಯಾಗಲೆಂದು ಸಂಜೆ ಆಫೀಸಿಂದ ಕ್ಯಾಬ್ ಅಲ್ಲಿ ಹೊರಟಿದ್ದೆವು. ಸ್ವಲ್ಪ ಕತ್ತಲೆ ಯಾದರಿಂದ ಕ್ಯಾಬಿಗಿಂತ ಬಸ್ಸಲ್ಲಿ ಬರುವುದು ಒಳಿತೆಂದು ಮುಖ್ಯ ಬಸ್ ನಿಲ್ದಾಣದಲ್ಲಿ ನಿಂತಿದ್ದೆವು. ಅಲ್ಲಿ ಸ್ವಲ್ಪ ಜನ ಸಂದಣಿ ಕಮ್ಮಿ ಇದ್ರಿಂದ ಬಸ್ ಟಿಕೆಟ್ ಆಫೀಸ್ ಬಳಿಯಲ್ಲಿ ನಿಲ್ಲುವುದು ಒಳಿತೆಂದು ಅಲ್ಲಿ ಹೋಗಿ ನಿಂತೆವು. ಅಷ್ಟರಲ್ಲಿ ನನ್ನ ಕಿವಿ ಹತ್ತಿರ ಯಾರೋ ಹಾಡು ಹೇಳಿದಂತಾಗಿ ತಿರುಗಿ ನೋಡಿದರೆ ಅವನು ಪಕ್ಕದಲ್ಲೇ ನಿಂತಿದ್ದ. ಮೈಯಲ್ಲಿ ಖಾಖಿ ಧರಿಸಿದ್ದರು ಅವನ ದೃಷ್ಟಿ ಮಾತ್ರ ನೀಚವಾಗಿತ್ತು. ಆ ವಿಚಿತ್ರ ನಗು, ಆ ದೃಷ್ಟಿ ಅಷ್ಟು ಹತ್ತಿರದಲ್ಲಿ ನೋಡಿ ಒಂದು ಘಳಿಗೆ ಭೂಮಿ ಕುಸಿದಂತಾಗಿತ್ತು. ಗೆಳತಿಯೂ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಳು. ಎರಡು ಕಡೆಯಿಂದಲೂ ವಾಹನಗಳು ಬರುತಿದ್ದರು ಅದರ ಪರಿವೆಯಿಲ್ಲದೆ ಇಬ್ಬರು ರಸ್ತೆ ದಾಟಿ ಇನ್ನೊಂದು ಕಡೆಗೆ ಹೋಗಿ ನಿಂತುಬಿಟ್ವಿ. ಏನು ಮಾಡಬೇಕೆಂದು ತೋಚಲಿಲ್ಲ. ಆಚೆ ಬದಿಯಿಂದ ನಮ್ಮನ್ನು ತಿನ್ನುವಂತೆ ನೋಡುತಿದ್ದ. ಕ್ಯಾಬ್ ಬುಕ್ ಮಾಡಿ ಅಲ್ಲಿಂದ ವಾಪಸ್ ಬಂದ್ವಿ. ಅಷ್ಟೇನೂ ದೊಡ್ಡದು ಆಗದಿದ್ದರು ಎಲ್ಲಿಯೋ ಆ ಘಟನೆ ನೆನಪಿಸಿದರೆ ಇಂದೂ ಮೈ ನಡುಗುತ್ತೆ. ರಾತ್ರಿಯೆಲ್ಲ ಮುಂಚೆ ಭೂತದ ಕನಸು ಬಿದ್ದರೆ ಇಂದು ಯಾರೋ ಅಟ್ಟಿಸಿ ಬಂದಂತಾಗಿ ಎಷ್ಟೋ ಸಲ ನಿದ್ದೆಯಿಂದ ಗಾಬರಿಯಲ್ಲಿ ಎದ್ದಿರುವುದಿದೆ.
ಹುಡುಗಿಯರು ಆದಷ್ಟು ತಗ್ಗಿ ಬಗ್ಗಿ ನಡೆಯಬೇಕು, ಹುಡುಗರನ್ನು ಮರಳು ಗೊಳಿಸುವಂತಹ ಬಟ್ಟೆಯನ್ನು ಹಾಕಬಾರದು, ಜಾಸ್ತಿಯಾಗಿ ಜನಸಂದಣಿಯಲ್ಲಿ ಓಡಾಡಬೇಕು ಎಂದು ಎಲ್ಲರೂ ಹೇಳುವರು.ಸಣ್ಣ ವಿಷಯಾನೇ ಇರಲಿ ಯಾರಾದರೂ ಅಷ್ಲೀಲವಾಗಿ ವರ್ತಿಸಿದರೆ ಪೊಲೀಸ್ ಕಂಪ್ಲೇಂಟ್ ಕೊಡಬೇಕೆಂದೆನ್ನುತ್ತಾರೆ. ಆದರೆ ಖಾಖಿ ಧರಿಸಿ ರಕ್ಷಣೆಗೆಂದು ನಿಂತವನೇ ಭಕಾಸುರನಾದರೆ ಇನ್ನು ಯಾರನ್ನು ನಂಬಲು ಸಾಧ್ಯ. ಜನರಿಂದ ತುಂಬಿ ತುಳುಕುತ್ತಿರುವ ಬಸ್ಸಿನಲ್ಲೂ ಮೈಗೆ ಕೈ ಹಾಕುವವರಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಹುಡುಗಿಯರ ಭಾವಚಿತ್ರವನ್ನು ತಮ್ಮ ಲೈಂಗಿಕ ತೃಪ್ತಿಗಾಗಿ ದುರುಪಯೋಗ ಪಡಿಸುವವರು ಇದ್ದಾರೆ.
ಇದೆಂದ ಮಾತ್ರಕ್ಕೆ ಇಡೀ ಗಂಡು ಕುಲವನ್ನೇ ದೂಷಿಸುವುದೂ ಸರಿಯಲ್ಲ. ಸರ್ಕಾರ ಕೊಟ್ಟಿರುವ ಸ್ತ್ರೀ ಹಕ್ಕುಗಳನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡುವವರು ತುಂಬಾ ಮಹಿಳೆಯರನ್ನು ಕಾಣುತ್ತೇವೆ. ಹೆಣ್ಣಿಗೆ ಅನ್ಯಾಯ ಮಾಡಿದವನಿಗೂ , ನಿರ್ದೋಷಿಯಾದ ಗಂಡಿನ ಮೇಲೆ ಆರೋಪ ಹೊರಿಸುವ ಹೆಣ್ಣಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಹೆಣ್ಣಾಗಲಿ , ಗಂಡಾಗಲಿ ಒಬ್ಬರು ಇನ್ನೊಬರಿಗಿಂತ ಶ್ರೇಷ್ಠ ಎನ್ನುವುದಕ್ಕಿಂತ ಒಬ್ಬರನ್ನೊಬ್ಬರು ಗೌರವದಿಂದ ಕಾಣಲು ಕಲಿಯೋಣ.
ವಾಟ್ಸಪ್ಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಎಲ್ಲಿ ನೋಡಿದರು ಹೆಣ್ಣಿನ ಜೀವನ, ಅವಳ ತ್ಯಾಗ, ತಾಳ್ಮೆ, ನೋವಿನ ಬಗ್ಗೆಯೇ ತುಂಬಿ ತುಳುಕುತ್ತಿದೆ. ವಿಶ್ ಮಾಡಿದವರಿಗೆ ರಿಪ್ಲೈ ಮಾಡಿ, ಮಹಿಳಾ ದಿನಾಚರಣೆ ಆಚರಿಸುವುದು ಸರಿಯೋ ತಪ್ಪೋ ಎಂದು ಮನದಲ್ಲೇ ಚರ್ಚಿಸುತ್ತ ಆಫೀಸಿಗೆಂದು ಹೊರಟೆ. ಆಫೀಸ್ ಗೇಟ್ ಅಲ್ಲಿ ಸೆಕ್ಯೂರಿಟಿ ಗಾರ್ಡ್ಸ್ ಮುಗುಳ್ನಗುತ್ತ "ಹ್ಯಾಪಿ ವುಮೆನ್ಸ್ ಡೇ" ಎಂದು ವಿಶ್ ಮಾಡಿ ಒಂದು ಬ್ಯಾಡ್ಜ್ ಕೈಗಿತ್ತರು. ಒಂದು ಕಡೆಯಲ್ಲಿ ಹೆಣ್ಣಿನ ಚಿತ್ರವಿದ್ದರೆ ಇನ್ನೊಂದು ಕಡೆಯಲ್ಲಿ "ಎಮರ್ಜೆನ್ಸಿ ಕಾಂಟ್ಯಾಕ್ಟ್ಸ್ " ಇದ್ವು. ಅದು ಮಹಿಳಾ ದಿನಾಚರಣೆಗೆ ಸಿಕ್ಕಿದ ಗಿಫ್ಟ್ ಆಗಿತ್ತು. ಅಯ್ಯೋ ಇಷ್ಟೇನಾ ಎಂದುಕೊಂಡೆ, ಆದರು ಎಲ್ಲೊ ಮನದಲ್ಲಿ ಇದೆ ಇಂದಿನ ದಿನಗಳಲ್ಲಿ ಬಲು ಅವಶ್ಯವಾದದು ಎಂದೆನಿಸಿತು.
ಒಂದು ಕೋಣೆಯಲ್ಲಿ ಒಬ್ಬಳು ಇರಲು ಹೆದರುತ್ತಿದ್ದವಳು ನಾನು. ಎಲ್ಲಿ ಕರೆಂಟ್ ಹೋಗಿ ಕತ್ತಲೆ ಯಲ್ಲಿ ಭೂತ ಕಾಣಿಸುವುದೋ ಎಂಬ ಭಯ. ಇನ್ನೊಂದು ಕೋಣೆ ಯ ದೀಪ ಆರಿಸಿ ಬಾ ಎಂದು ಅಮ್ಮ ಹೇಳಿದರೆ ನನ್ನಿಂದ ಆಗದು ಎನ್ನುತ್ತಿದ್ದೆ. ಆದರೆ ಇಂದು ಜನರಿಂದ ತುಂಬಿ ತುಳುಕುತ್ತಿರುವ ಜಾಗದಲ್ಲಿದ್ದರು ಹಗಲಲ್ಲೂ ಹೆದರಿಕೆ. ಭೂತದಲ್ಲ ಮನುಷ್ಯರದು. ಮುಂಚೆ ರಸ್ತೆ ದಾಟುವಾಗ ಜಾಗೃತೆ ಎಂದು ಹೇಳಿ ಕಳುಹಿಸುತ್ತಿದ್ದರು ಅಮ್ಮ , ಇಂದು ರೋಡ್ ದಾಟಿ ಅಪಾರ್ಟ್ಮೆಂಟ್ ಗೇಟ್ ಒಳಗಿದ್ದೇನೆ ಎಂದರು ಅಮ್ಮ, ಮನೆ ತಲುಪಿದ ಕೂಡಲೇ ಕಾಲ್ ಮಾಡು ಎನ್ನುವರು. ದಾರಿಯಲ್ಲಿ ಯಾವ ಕಾಮ ಪಿಶಾಚಿ ಯ ಕೈಗೆ ತನ್ನ ಮಗಳು ಬಲಿಯಾಗುವಳೋ ಎಂಬ ಭಯ ಎಲ್ಲ ಹೆತ್ತವರಿಗೆ ಕಾಡುತ್ತಿದೆ. ದಿನಪತ್ರಿಕೆ ತೆರೆದರೆ ಅತ್ಯಾಚಾರಗಳ ಸುದ್ದಿಗಳೇ ತುಂಬಿ ಹೋಗಿದೆ. ಒಂದು ತಿಂಗಳ ಮಗುವಿನಿಂದ ಹಿಡಿದು ತೊಂಬತ್ತು ವರ್ಷದ ಮುದುಕಿಯ ಮೇಲು ಇಂದು ದೌರ್ಜನ್ಯ ನಡೆಯುತ್ತಿದೆ. ಯಾವ ಹೆಣ್ಣನ್ನು ಕೇಳಿದರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಿರುಕಳವನ್ನು ಅನುಭವಿಸಿರುವುದು ಕಟು ಸತ್ಯ.
ಇಂತಹ ಒಂದು ಅನುಭವ ಒಂದು ವರ್ಷದ ಹಿಂದೆ ನಡೆದಿದ್ದರೂ ಇಂದೂ ಹಚ್ಚ ಹೆಸರಾಗಿಯೇ ಮನದಲ್ಲಿ ನೆಲೆಯಾಗಿದೆ. ಪುಣೆ ಗೆ ಬಂದ ಮೊದಲ ವಾರವಾಗಿತ್ತು. ಗೆಳತಿಯ ಸಂಭಂದಿಕರೊಬ್ಬರನ್ನು ಭೇಟಿಯಾಗಲೆಂದು ಸಂಜೆ ಆಫೀಸಿಂದ ಕ್ಯಾಬ್ ಅಲ್ಲಿ ಹೊರಟಿದ್ದೆವು. ಸ್ವಲ್ಪ ಕತ್ತಲೆ ಯಾದರಿಂದ ಕ್ಯಾಬಿಗಿಂತ ಬಸ್ಸಲ್ಲಿ ಬರುವುದು ಒಳಿತೆಂದು ಮುಖ್ಯ ಬಸ್ ನಿಲ್ದಾಣದಲ್ಲಿ ನಿಂತಿದ್ದೆವು. ಅಲ್ಲಿ ಸ್ವಲ್ಪ ಜನ ಸಂದಣಿ ಕಮ್ಮಿ ಇದ್ರಿಂದ ಬಸ್ ಟಿಕೆಟ್ ಆಫೀಸ್ ಬಳಿಯಲ್ಲಿ ನಿಲ್ಲುವುದು ಒಳಿತೆಂದು ಅಲ್ಲಿ ಹೋಗಿ ನಿಂತೆವು. ಅಷ್ಟರಲ್ಲಿ ನನ್ನ ಕಿವಿ ಹತ್ತಿರ ಯಾರೋ ಹಾಡು ಹೇಳಿದಂತಾಗಿ ತಿರುಗಿ ನೋಡಿದರೆ ಅವನು ಪಕ್ಕದಲ್ಲೇ ನಿಂತಿದ್ದ. ಮೈಯಲ್ಲಿ ಖಾಖಿ ಧರಿಸಿದ್ದರು ಅವನ ದೃಷ್ಟಿ ಮಾತ್ರ ನೀಚವಾಗಿತ್ತು. ಆ ವಿಚಿತ್ರ ನಗು, ಆ ದೃಷ್ಟಿ ಅಷ್ಟು ಹತ್ತಿರದಲ್ಲಿ ನೋಡಿ ಒಂದು ಘಳಿಗೆ ಭೂಮಿ ಕುಸಿದಂತಾಗಿತ್ತು. ಗೆಳತಿಯೂ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಳು. ಎರಡು ಕಡೆಯಿಂದಲೂ ವಾಹನಗಳು ಬರುತಿದ್ದರು ಅದರ ಪರಿವೆಯಿಲ್ಲದೆ ಇಬ್ಬರು ರಸ್ತೆ ದಾಟಿ ಇನ್ನೊಂದು ಕಡೆಗೆ ಹೋಗಿ ನಿಂತುಬಿಟ್ವಿ. ಏನು ಮಾಡಬೇಕೆಂದು ತೋಚಲಿಲ್ಲ. ಆಚೆ ಬದಿಯಿಂದ ನಮ್ಮನ್ನು ತಿನ್ನುವಂತೆ ನೋಡುತಿದ್ದ. ಕ್ಯಾಬ್ ಬುಕ್ ಮಾಡಿ ಅಲ್ಲಿಂದ ವಾಪಸ್ ಬಂದ್ವಿ. ಅಷ್ಟೇನೂ ದೊಡ್ಡದು ಆಗದಿದ್ದರು ಎಲ್ಲಿಯೋ ಆ ಘಟನೆ ನೆನಪಿಸಿದರೆ ಇಂದೂ ಮೈ ನಡುಗುತ್ತೆ. ರಾತ್ರಿಯೆಲ್ಲ ಮುಂಚೆ ಭೂತದ ಕನಸು ಬಿದ್ದರೆ ಇಂದು ಯಾರೋ ಅಟ್ಟಿಸಿ ಬಂದಂತಾಗಿ ಎಷ್ಟೋ ಸಲ ನಿದ್ದೆಯಿಂದ ಗಾಬರಿಯಲ್ಲಿ ಎದ್ದಿರುವುದಿದೆ.
ಹುಡುಗಿಯರು ಆದಷ್ಟು ತಗ್ಗಿ ಬಗ್ಗಿ ನಡೆಯಬೇಕು, ಹುಡುಗರನ್ನು ಮರಳು ಗೊಳಿಸುವಂತಹ ಬಟ್ಟೆಯನ್ನು ಹಾಕಬಾರದು, ಜಾಸ್ತಿಯಾಗಿ ಜನಸಂದಣಿಯಲ್ಲಿ ಓಡಾಡಬೇಕು ಎಂದು ಎಲ್ಲರೂ ಹೇಳುವರು.ಸಣ್ಣ ವಿಷಯಾನೇ ಇರಲಿ ಯಾರಾದರೂ ಅಷ್ಲೀಲವಾಗಿ ವರ್ತಿಸಿದರೆ ಪೊಲೀಸ್ ಕಂಪ್ಲೇಂಟ್ ಕೊಡಬೇಕೆಂದೆನ್ನುತ್ತಾರೆ. ಆದರೆ ಖಾಖಿ ಧರಿಸಿ ರಕ್ಷಣೆಗೆಂದು ನಿಂತವನೇ ಭಕಾಸುರನಾದರೆ ಇನ್ನು ಯಾರನ್ನು ನಂಬಲು ಸಾಧ್ಯ. ಜನರಿಂದ ತುಂಬಿ ತುಳುಕುತ್ತಿರುವ ಬಸ್ಸಿನಲ್ಲೂ ಮೈಗೆ ಕೈ ಹಾಕುವವರಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಹುಡುಗಿಯರ ಭಾವಚಿತ್ರವನ್ನು ತಮ್ಮ ಲೈಂಗಿಕ ತೃಪ್ತಿಗಾಗಿ ದುರುಪಯೋಗ ಪಡಿಸುವವರು ಇದ್ದಾರೆ.
ಇದೆಂದ ಮಾತ್ರಕ್ಕೆ ಇಡೀ ಗಂಡು ಕುಲವನ್ನೇ ದೂಷಿಸುವುದೂ ಸರಿಯಲ್ಲ. ಸರ್ಕಾರ ಕೊಟ್ಟಿರುವ ಸ್ತ್ರೀ ಹಕ್ಕುಗಳನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡುವವರು ತುಂಬಾ ಮಹಿಳೆಯರನ್ನು ಕಾಣುತ್ತೇವೆ. ಹೆಣ್ಣಿಗೆ ಅನ್ಯಾಯ ಮಾಡಿದವನಿಗೂ , ನಿರ್ದೋಷಿಯಾದ ಗಂಡಿನ ಮೇಲೆ ಆರೋಪ ಹೊರಿಸುವ ಹೆಣ್ಣಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಹೆಣ್ಣಾಗಲಿ , ಗಂಡಾಗಲಿ ಒಬ್ಬರು ಇನ್ನೊಬರಿಗಿಂತ ಶ್ರೇಷ್ಠ ಎನ್ನುವುದಕ್ಕಿಂತ ಒಬ್ಬರನ್ನೊಬ್ಬರು ಗೌರವದಿಂದ ಕಾಣಲು ಕಲಿಯೋಣ.
Nice one. Very aptly written.
ReplyDeleteThanks 😊
ReplyDeleteGood one!! :)
ReplyDeleteThanks☺️
Delete