Skip to main content

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು.
ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?"
ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ."
ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು.
ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ."
ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. "
ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. "
ಹೆಂಗಸು ೨: "ಏನೋ ಅವ್ಳಿಗೇ ಗೊತ್ತು. ಕಲಿತಾಳೋ ಬಿಡ್ತಾಳೋ. ಗಣಿತ, ಫಿಸಿಕ್ಸ್ ಸುಬ್ಜೆಕ್ಟ್ಸ್ ಅಂದ್ರೆ ಇಷ್ಟ ಇಲ್ಲ ಅಂತಾಳೆ. ಆರ್ಕಿಟೆಕ್ಚರ್ ಗೆ ಅದೇ ತಾನೇ ಮುಖ್ಯ.  "
ಹೆಂಗಸು ೧ : "ಇರ್ಲಿ ಬಿಡಿ . ಮುಂದೆ ಒಳ್ಳೆ ಕಲೀಬಹುದು. ಇಂದಿನ ಕಾಲದಲ್ಲಿ ಒಳ್ಳೆ ಸಂಪಾದಿಸುವ  ಹುಡುಗ ಸಿಗ್ಬೇಕಿದ್ರೆ, ಹುಡುಗೀಗೂ  ಇಂಜಿನೀಯರೋ  ಡಾಕ್ಟರೋ ಪದವಿ ಇದ್ರೆ  ಒಳ್ಳೇದು. ಹೇಗಿದೆ ಫೀಸ್ ಇಲ್ಲಿ ? "
ಹೆಂಗಸು ೨ : "ಪ್ರತಿ ವರ್ಷಕ್ಕೆ ಎರಡೂವರೆ ಲಕ್ಷ. ಐದು ವರ್ಷ ಅಂದಾಗ ಅಂತು ಇಂತು ಹನ್ನೆರಡು ಲಕ್ಷ ಇವಳಿಗೆ ಕೂಡಿಡ್ಬೇಕು. ಫೀಸ್ ಕಟ್ಟಿದ್ರೆ ಸಾಕೆ. ಇನ್ನು ಲ್ಯಾಪ್ಟಾಪ್ , ಟೂರ್ , ಪುಸ್ತಕ ಅಂತೆಲ್ಲ ಖರ್ಚು ಸೇರಿಸಿದ್ರೆ ಇನ್ನು ಹನ್ನೆರಡು ಲಕ್ಷ ಬೇಕಾದೀತು.  ಅದು ಕಲರ್ ಡ್ರೆಸ್. ಯುನಿಫಾರ್ಮ್ ಇಲ್ಲ. ಹುಡುಗಿಯರಂದ್ಮೇಲೆ ನಾಲ್ಕು ಬಟ್ಟೆ ಸಾಕಾದೀತೇ . ನಾಲ್ಕೈದು  ಕಪಾಟು ಅಂಗಿ ಬೇಕಾಗಬಹುದು."
ಹೆಂಗಸು ೧ : "ಹನ್ನೆರಡೂವರೆ ಲಕ್ಷ ಫೀಸೇ ? ಕಾಲೇಜು ನಡೆಸುವುದೂ ಒಂದು ವ್ಯಾಪಾರ ಆಗ್ಬಿಟ್ಟಿದೆ ಕಣ್ರೀ. ಇತ್ತೀಚಿಗೆ ಎಲ್ಲರೂ ಎಂಜಿನೀಯರಿಂಗ್ ಸೇರುವವರೇ  ಇರುವವರು . ಹಾಗಂತ ಫೀಸ್ ಕೂಡ ದುಬಾರಿ ಆಗ್ಬಿಟ್ಟಿದೆ."
ಅಷ್ಟು ಹೊತ್ತು ಇವರ ಸಂಭಾಷಣೆ ಕೇಳುತ್ತಿದ್ದ ಇನ್ನೊಬ್ರು -
ಹೆಂಗಸು ೩ : " ಫೀಸ್ ಜಾಸ್ತಿ ಆಗದೆ ಏನು. ಪಾಪದವರ ಮಕ್ಕಳು ಇಂದು ಇಂಜಿನಿಯರಿಂಗ್ ಕಲೀತಿದ್ದಾರೆ. ಮನೆಯಲ್ಲಿ ಎರಡಹೊತ್ತು ಊಟ  ಮಾಡೋಕು ಗತಿ ಇಲ್ಲದವರೂ  ಮಕ್ಕಳನ್ನ ಇಂಜಿನಿಯರಿಂಗ್ ಗೆ ಸೇರಿಸುತ್ತಾರೆ."
ಹೆಂಗಸು ೧ : "ಹೌದು ಅದೇ. ಇದ್ರಿಂದ ನಮ್ಮಂತವರಿಗೆ ನಷ್ಟ. ನಾವು ಹಣ ಸಂಪಾದಿಸಿದೆಲ್ಲ ಫೀಸಿಗೆ ಪೋಲಾಗ್ತಿದೆ ನೋಡಿ"
ಹೀಗೆ ಅವರ ಸಂಭಾಷಣೆ ಸ್ವಲ್ಪ ಹೊತ್ತಿಗೆ ಮುಂದುವರಿಯಿತು.

ಅಲ್ಲಿಂದ ಮನೆಗೆ ಹಿಂತಿರುಗಿ ಬರ್ಬೇಕಿದ್ರೆ ಅವರ ಸಂಭಾಷಣೆಯೇ ನನ್ನ ಮನಸಲ್ಲಿ ಇನ್ನು ಗುಯ್ ಗುಡುತಿತ್ತು.ಇಂಜಿನಿಯರಿಂಗ್ ಎಂಬುದು ಇಂದು ಮನೆ ಮನೆ ಗಳಲ್ಲಿ ಕೇಳಿ ಬರುವ ಮಾತಾಗಿದೆ. ಬೀದಿ ಬೀದಿ ಯಲ್ಲಿ ತಲೆ ಎತ್ತಿ ನಿಂತಿರುವ ಕಾಲೇಜುಗಳ ಸಂಖ್ಯೆಯು ಪ್ರತಿ ವರ್ಷ ಜಾಸ್ತಿಯಾಗುತ್ತಿದೆ. ಅಂತೆಯೇ ಶಿಕ್ಷಣದ ಗುಣಮಟ್ಟ ಇಳಿಯುತ್ತಿರುವುದು ನಾವು ಕಣ್ಣಾರೆ ನೋಡ್ತಿದ್ದೇವೆ. ಇಂಜಿನಿಯರಿಂಗ್ ಒಂದೇ ಅಲ್ಲ. ಬೇಬಿ ಸಿಟ್ಟಿಂಗ್, ಶಾಲೆ ಗಳಿಂದ ಹಿಡಿದು ಯಾವುದೇ ಪದವಿ ಆರಿಸಿದರು ಎಲ್ಲವೂ ಇಂದು ಬಿಸಿನೆಸ್ ಆಗಿ ಬಿಟ್ಟಿದೆ, ಹೆತ್ತವರ ಘನತೆಯು ಫೀಸ್ ಜಾಸ್ತಿ ಇದ್ದ ಕಾಲೇಜಿಗಳಿಗೆ ತಮ್ಮ ಮಕ್ಕಳನ್ನು ಸೇರಿಸುವದರಲ್ಲಿ ಇದ್ದರೆ, ಮಕ್ಕಳಿಗೆ ಕಾಲೇಜಿಗೆ ಹೋಗಿ ಹಾಟ್ ಅಂಡ್ ಸ್ಮಾರ್ಟ್ ಹುಡುಗ ಅಥವ ಹಾಟ್ ಅಂಡ್ ಕ್ಯೂಟ್ ಹುಡುಗಿ ಯೊಡನೆ ಸುತ್ತಲೂ ಸಿಗುವ ಅವಕಾಶದಂತೆ ಆಗ್ಬಿಟ್ಟಿದೆ. ತಮ್ಮ ಇಷ್ಟದಿಂದ ಕಲಿಯಲು ಬರುವವರು ಕೇವಲ ಬೆರಳೆಣಿಕೆಯಷ್ಟೇ. ಇಂಜಿನಿಯರಿಂಗ್ ಫೀಸ್ ಜಾಸ್ತಿ ಆಗಿದ್ದಕ್ಕೆ ಕಾರಣ ತಮ್ಮ ಘನತೆ ಗೋಸ್ಕರ ಕಲಿಯಲು  ಮನಸಿಲ್ಲದ ಮಕ್ಕಳನ್ನ ಸೇರಿಸುವುದಿಂದಲೋ  ಅಲ್ಲ ಇಡೀ ದಿನ ಕೂಲಿ ಕೆಲಸ  ಮಾಡಿ, ಚಿಮಿಣಿ ದೀಪದಲ್ಲೂ ಕಷ್ಟಪಟ್ಟು ಓದುತ್ತಿರುವ ತಮ್ಮ ಮಕ್ಕಳ ಆಸೆ ಈಡೇರಿಸುವವರಿಂದಲೋ ?

Comments

Post a Comment

Popular posts from this blog

ಕ್ಷಮಿಸಿ ಟೀಚರ್ ...!

ಆವತ್ತು ಎಂದಿನಂತೆ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅದು ಯಾವತ್ತೂ ಮರೆಯದ ದಿನವಾಗುತ್ತದೆಂದು ಕನಸಲ್ಲೂ ಎಣಿಸಿರಲಿಲ್ಲ . ತಪ್ಪು ಎನ್ನುವುದಕ್ಕಿಂತ ಏನೋ ಪಾಪ ಮಾಡಿದ್ದೇನೆ ಎಂಬ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ. ನನ್ಮುಂದೆ ಬಸ್ಸೊಂದು ನಿಂತಿತ್ತು. ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿರುವುದೆಂದು ಬಸ್ಸು ನೋಡಿದಾಗ  ತಿಳಿಯಿತು. ನಾನೋ ಇದನೆಲ್ಲ ನೋಡುತಿದ್ದರು ನನ್ನ ಮನಸ್ಸು ಏನೋ ಬೇರೆ ಕಡೆಯೇ ತೇಲಿದಂತ ಅನುಭವ. ಆ ಬಸ್ಸಿನ ಕಿಟಕಿಯಿಂದ  ಸುಮಾರು ಇಪ್ಪತೆಂಟು ಮೂವತ್ತು ವರ್ಷದ ಹುಡುಗಿಯೊಬ್ಬಳು ನನ್ನ ಕಡೆ ನೋಡಿ ಕೈ ಬೀಸಿದಂತೆ ಆಯ್ತು. ಆದರೆ ಯಾರೆಂಬುದು ನನಗೆ ತಿಳಿಯಲೇ ಇಲ್ಲ. ನನ್ನ ನೋಡಿ ಕೈ ಬೀಸಿದಳೋ ಅಲ್ಲ ಪಕ್ಕದಲ್ಲಿರುವವರಿಗೆ ಸನ್ನೆ ಮಾಡುತಿದ್ದಳೊ ತಿಳಿಯಲಿಲ್ಲ.ಆಚೆ ಈಚೆ ನೋಡಿದರೆ ಯಾರು ಅವಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಮತ್ತೆ ಅವಳು ನನ್ನನ್ನೇ ನೋಡ್ತಿದಂತೆ ಅನಿಸಿತು. ಏನು ಯೋಚಿಸುತಿದ್ದೆನೋ ದೇವರಿಗೆ ಗೊತ್ತು. ನಾನು ಅವಳಿಗೆ ಪ್ರತಿಕ್ರಿಯಿಸಲೇ  ಇಲ್ಲ. ನಾನು ಅವಳಿಗೆ ಕೈ ಬೀಸುತಿದ್ದರೆ  ನನ್ನ ಗಂಟೇನು  ಹೋಗುತಿತ್ತು ಎಂದು ಇವತ್ತಿನವರೆಗೂ  ನನ್ನನು ನಾನು ಎಷ್ಟು ಬಾರಿ ಬೈದುಕೊಂಡಿದ್ದೇನೋ ಏನೋ. ಸ್ವಲ್ಪ ಹೊತ್ತಾದ ನಂತರ ಯಾರೋ ಬಸ್ಸಿನಿಂದ ಇಳಿದಂತಾಯ್ತು.  ಇಳಿದವಳನ್ನು ನೋಡಿ ಅವಾಕ್ಕಾದೆ . ನಾನು ಕಲಿತ ಶಾಲೆಯಲ್ಲೇ ನನ್ನ ಕಸಿನ್ ಓದುತ್ತಿದ್ದಳು . ಅವಳು ಬಸ್ಸಿನಿಂದ ಇಳಿದಂತೆ ಕಿಟಕಿ ಬದಿಯಲ್ಲಿದ್ದ

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್                       ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.  ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂ

ಸ್ಪೂರ್ತಿ

ಮುಂಜಾನೆ ಎದ್ದು ಸ್ನಾನ ಮಾಡಿ ಬಂದು ಮೊಬೈಲ್ ನೋಡಿದರೆ ಆರು ಮಿಸ್ಸ್ಡ್ ಕಾಲ್ಸ್ ಇದ್ವು. ಕರೆ ಮಾಡಿದೆ. ಆಚೆಯಿಂದ "ಅಕ್ಕ ಇವತ್ತು ಏಕ್ಸಾಮ್ ಬರೀಲೀಕ್ಕೆ ಬರ್ತಿದ್ದೀರಿ ತಾನೇ ?" ಎಂದು  ಹುಡುಗಿ ಗಾಬರಿ ಸ್ವರದಲ್ಲಿ ಕೇಳಿದಳು. "ಹೌದು ! ಹೊರಡ್ತಿದ್ದೀನಿ." ಎಂದು ಸಮಾಧಾನಿಸಿ ಫೋನ್ ಪಕ್ಕಕ್ಕಿಟ್ಟು, ಬೇಗನೆ ತಯಾರಾಗಿ ರೂಮಿನಿಂದ ಹೊರಡಿದೆ. ಅದು ೪೫ ನಿಮಿಷಗಳ ಪ್ರಯಾಣ. ಅಷ್ಟರಲ್ಲಿ ಮೂರ್ನಾಲ್ಕು ಸಲ ನಾನು ಎಲ್ಲಿದ್ದೀನಿ ಎಂದು ವಿಚಾರಿಸಲು ಕರೆ ಮಾಡಿದ್ದಳು. ೮:೪೫ ಗೆ ತಲುಪಬೇಕಿತ್ತು. ೮:೩೦ ಗೆ ನೇ ತಲುಪಿದ್ದೆ. ಕಾಲೇಜು ಹೊರಗೆ ತನ್ನ ಗೆಳತಿಯೊಟ್ಟಿಗೆ ಕಾದು ನಿಂತಿದ್ದಳು.  "ಹಾಯ್, ಸ್ಪೂರ್ತಿ ತಾನೇ ? " ಅಂದೆ. "ಹೌದಕ್ಕಾ, ಬಂದ್ರಾ. ಹೇಗೆ ಪರಿಚಯವಾಯ್ತು . ನಾವು ಎಂದೂ ಭೇಟಿಯಾಗಿಲ್ಲ ಅಲ್ವಾ" ಎಂದಾಗ, ಅಲ್ಲಿರುವ ಜನರಿಗಿಂತ ಭಿನ್ನವಾಗಿ ಅವಳು ಇದ್ದುದ್ದರಿಂದ ಪರಿಚಯವಾಯ್ತು ಎಂದು ಹೇಳಲು ಮನಸ್ಸಾಗಲಿಲ್ಲ. ಸುಮ್ನೆ ಅವಳ ಬೆನ್ನು ತಟ್ಟಿ ನಕ್ಕು ಬಿಟ್ಟೆ. "ಸಾರೀ ಅಕ್ಕ, ತುಂಬಾ ಸಲ ಕಾಲ್ ಮಾಡಿದೆ. ಮೊನ್ನೆ ನನ್ನ ಗೆಳತಿಗೆ ಒಬ್ರು ಏಕ್ಸಾಮ್ ಬರೀಲಿಕ್ಕೆ ಬರ್ತೇನೆ ಹೇಳಿ ಬಂದಿರ್ಲಿಲ್ಲ. ಅದ್ಕೆ ಗಾಬರಿಯಾಗಿದ್ದೆ " ಅಂದ್ಲು. ಕಾಲೇಜು ಒಳಗೆ ಹೋಗಿ ರೂಮ್ ಹುಡುಕಿ ಅಲ್ಲಿ ಕೂತು ಮಾತಾಡಲು ಶುರು ಮಾಡಿದ್ವಿ. ಸ್ವಲ್ಪ ಹೊತ್ತಾದ ನಂತರ ಸ್ಪೂರ್ತಿ ಹಾಗು ಅವಳ ಗೆಳತಿಯಂತೆ ಏಳೆಂಟು ಜನ ತಮ್ಮ ಬ