Skip to main content

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್
                     
ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.

 ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂತಂತೆ ಕಾಣುತಿತ್ತು ಅಂತೆಯೇ ಬಸಳೆ ಗಿಡದ ಬಳ್ಳಿ, ಕುಂಬಳಕಾಯಿಯ ಬಳ್ಳಿಗಳು ತಮ್ಮ ಎಲೆಯಲ್ಲಿ ನೀರು ಶೇಕರಿಸುವಂತಿದ್ದರೆ ಮೊನ್ನೆಯಷ್ಟೇ ನೆಟ್ಟ ಮೆಣಸಿನ ಗಿಡಗಳು ನೀರಿನ ರಭಸಕ್ಕೆ ಮಣ್ಣಲ್ಲಿ ನಿಲ್ಲಲು ಕಷ್ಟಪಡುತಿದ್ದವು. ಹೀಗೆ ಒಂದಡೆ ತರಕಾರಿ ತೋಟವಾದ್ರೆ ಇನ್ನೊಂದು ಬದಿಯಲ್ಲಿ ಮಲ್ಲಿಗೆ, ದಾಸವಾಳ, ಗುಲಾಬಿ ಹೂವುಗಳು ರಾರಾಜಿಸುತ್ತಿದ್ದವು. ಬೇಸಿಗೆಯ ಬೇಗೆಗೆ ಬೆಂದುಹೋದ ಅವುಗಳಿಗೆ ಮಳೆ ಬಂದಾಗ ಆಗಿರುವ ಖುಷಿ ಕಂಡು, ವರ್ಷವಿಡೀ ಸ್ವಲ್ಪ ಹೊತ್ತಾದರೂ ಮಳೆ ಬರಬಾರದೇ ಎಂದು ಎನಿಸಿತು.

ಹಾಗೆ ನಿಂತಿರುವಾಗ ದೂರದ ಗದ್ದೆಯಲ್ಲಿ 'ಹೊ ಹೊ ' ಎಂದು ಕೋಣಗಳಿಗೆ ಹೇಳುವುದು ಕೇಳಿಸುತಿತ್ತು. ಮಳೆ ಹನಿಯ ಸದ್ದೊಂದಿಗೆ, ಪಕ್ಕದಲ್ಲಿರುವ ನದಿ ಹರಿಯುವ ಸದ್ದು ಕಿವಿಗಳಿಗೆ ಬೆಳಗಿನ ಸುಪ್ರಭಾತದಂತಿತ್ತು.  ಅಲ್ಲೇ ಪಕ್ಕದಲ್ಲಿರುವ  ಬಂಡೆಯ ಮೇಲೆ ದಿನಾ ಸಂಜೆಯಾಗುವಾಗ ಕಾದಂಬರಿಯೊಂದನ್ನು ಹಿಡಿದು ಅಲ್ಲಿ ಕೂರುವುದು ನನ್ನ ದಿನಚರಿ. ಸೂರ್ಯಾಸ್ತವಾಗುವ ಹೊತ್ತಲ್ಲಿ ಕೆಂಪಾದ ಬಾನು ನೋಡಿದರೆ ಕಣ್ಣಿಗೆ ಹಬ್ಬವೇ ಸರಿ. ಇನ್ನೇನು ಬೆಳಗಿನ ತಿಂಡಿ ತಯಾರು ಮಾಡಬೇಕೆಂದು ಯೋಚನೆ ಬಂದಂತೆ  ಅಡಿಗೆ ಕೋಣೆಯೊಳಗೆ ಹೊಕ್ಕಿಬಿಟ್ಟೆ. ಬೆಳಗಿನ ತಿಂಡಿ, ಮಧ್ಯಾನ್ಹದ ಅಡಿಗೆ ಮುಗಿಸಿ ಬಂದು ಕೂತರೆ ಮಳೆ ನಿಂತಿತ್ತು. ದಿನಚರಿಯಂತೆ ಹಾಡುಗಳನ್ನು ಕೇಳುತ್ತ ಸೂಜಿ ದಾರದೊಂದಿಗೆ , ಇತೀಚೆಗೆ ಕೊಂಡ ಹಳದಿ  ಸೀರೆ  ಮೇಲೆ ಕಸೂತಿ ಮಾಡಲು ಶುರು ಮಾಡಿದೆ.

 ಹೊತ್ತೆಷ್ಟಾಯ್ತೆಂದು ಗಡಿಯಾರದತ್ತ ನೋಡಿದರೆ  ಗಂಟೆ ಐದಾಗಿತ್ತು. ಇನ್ನೇನು ಇವರು ಬರುವ ಹೊತ್ತಾಯ್ತೆಂದುಕೊಂಡು, ಒಂದು ತಟ್ಟೆ ತೆಗೊಂಡು ಹೊರಗೆ ಹೋಗಿ ಮಲ್ಲಿಗೆ ಕೊಯ್ದು ಮಾವಿನ ಮರದಲ್ಲಿ ನೇತಾಡುತಿದ್ದ ಜೋಕಾಲಿ ಮೇಲೆ ಕೂತು ಅವರ ನಿರೀಕ್ಷೆಯಲ್ಲಿ ಮಲ್ಲಿಗೆ ಕಟ್ಟುತ್ತಾ, ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಿದ್ದರೆ ಅಲಾರ್ಮ್ ಸದ್ದು ಕೇಳಿ ವಾಸ್ತವಕ್ಕೆ ಇಳಿದುಬಿಟ್ಟೆ. ಗಂಟೆ ಬೆಳಗ್ಗೆ ಐದಾಗಿತ್ತು. ಪಕ್ಕದಲ್ಲಿ ಗೆಳತಿ ಮಲಗಿದ್ದಳು.  ನನ್ನ ಕನಸಿನ ಗುಡಿಸಲಲ್ಲಿ ನಾನು ಇಲ್ಲವೆಂಬುದು ಅರಿವಾಯ್ತು. ಹಿಂದಿನ ರಾತ್ರಿ ಅವನ ಮೆಸೇಜಿನ ನಿರೀಕ್ಷಯಲ್ಲಿ ಮಲಗಿದ್ದೆ ಎಂಬ ನೆನಪಾಗಿ ವಾಟ್ಸಪ್ಪ್ ಓಪನ್ ಮಾಡಿದರೆ ಒಂದು ಮೆಸೇಜು ಬಂದಿರಲಿಲ್ಲ. ನಾನೇ ಶುಭೋಧಯ ಎಂದು  ಸೆಂಡ್ ಮಾಡಿ ವಾಸ್ತವದ ದಿನಚರಿಗೆ ಮಂಚದಿಂದ ಎದ್ದು  ಸಜ್ಜಾದೆ.

Comments

  1. Loved the attention to detail!!Every single element of this beautiful nature has been described amazingly by you 😊 Loved the concept of 'Kanasina Gudisalu'. Simplicity at its best!!👏 Waiting for your next post!! 😊😊

    ReplyDelete
  2. Liked this one. ನಾನು observe ಮಾಡಿದ ಹಾಗೆ ಈ ಫ್ಯಾನ್ಸಿ ಕನಸುಗಳು ರಾತ್ರಿ ಮಲಗಿದಾಗ ಬೀಳುವಂತಹ ಕನಸಲ್ಲ‌. ಕೆಲವೊಮ್ಮೆ ಮದ್ಯಾಹ್ನವೋ ಅಪರಾಹ್ನವೋ ಮಲಗಿದಾಗ, ಸಣ್ಣ ನಿದ್ದೆಯಲ್ಲಿ ಬೀಳುತ್ತವೆ.ಅಂತಹ ಸಮಯದಲ್ಲೂ ಹೊರಗೆ ನಿಜವಾಗಿಯೂ ಮಳೆ ಬೀಳುತ್ತಿದ್ದರೆ, ಕನಸಲ್ಲೂ ಮಳೆ! Kanasalli agiddu swalpaa reality link agirutte. Chanda

    ReplyDelete
    Replies
    1. ಹೌದು ಅದೂ ಸರಿ.. ☺ ಧನ್ಯವಾದಗಳು 😊💐

      Delete

Post a Comment

Popular posts from this blog

ಕ್ಷಮಿಸಿ ಟೀಚರ್ ...!

ಆವತ್ತು ಎಂದಿನಂತೆ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅದು ಯಾವತ್ತೂ ಮರೆಯದ ದಿನವಾಗುತ್ತದೆಂದು ಕನಸಲ್ಲೂ ಎಣಿಸಿರಲಿಲ್ಲ . ತಪ್ಪು ಎನ್ನುವುದಕ್ಕಿಂತ ಏನೋ ಪಾಪ ಮಾಡಿದ್ದೇನೆ ಎಂಬ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ. ನನ್ಮುಂದೆ ಬಸ್ಸೊಂದು ನಿಂತಿತ್ತು. ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿರುವುದೆಂದು ಬಸ್ಸು ನೋಡಿದಾಗ  ತಿಳಿಯಿತು. ನಾನೋ ಇದನೆಲ್ಲ ನೋಡುತಿದ್ದರು ನನ್ನ ಮನಸ್ಸು ಏನೋ ಬೇರೆ ಕಡೆಯೇ ತೇಲಿದಂತ ಅನುಭವ. ಆ ಬಸ್ಸಿನ ಕಿಟಕಿಯಿಂದ  ಸುಮಾರು ಇಪ್ಪತೆಂಟು ಮೂವತ್ತು ವರ್ಷದ ಹುಡುಗಿಯೊಬ್ಬಳು ನನ್ನ ಕಡೆ ನೋಡಿ ಕೈ ಬೀಸಿದಂತೆ ಆಯ್ತು. ಆದರೆ ಯಾರೆಂಬುದು ನನಗೆ ತಿಳಿಯಲೇ ಇಲ್ಲ. ನನ್ನ ನೋಡಿ ಕೈ ಬೀಸಿದಳೋ ಅಲ್ಲ ಪಕ್ಕದಲ್ಲಿರುವವರಿಗೆ ಸನ್ನೆ ಮಾಡುತಿದ್ದಳೊ ತಿಳಿಯಲಿಲ್ಲ.ಆಚೆ ಈಚೆ ನೋಡಿದರೆ ಯಾರು ಅವಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಮತ್ತೆ ಅವಳು ನನ್ನನ್ನೇ ನೋಡ್ತಿದಂತೆ ಅನಿಸಿತು. ಏನು ಯೋಚಿಸುತಿದ್ದೆನೋ ದೇವರಿಗೆ ಗೊತ್ತು. ನಾನು ಅವಳಿಗೆ ಪ್ರತಿಕ್ರಿಯಿಸಲೇ  ಇಲ್ಲ. ನಾನು ಅವಳಿಗೆ ಕೈ ಬೀಸುತಿದ್ದರೆ  ನನ್ನ ಗಂಟೇನು  ಹೋಗುತಿತ್ತು ಎಂದು ಇವತ್ತಿನವರೆಗೂ  ನನ್ನನು ನಾನು ಎಷ್ಟು ಬಾರಿ ಬೈದುಕೊಂಡಿದ್ದೇನೋ ಏನೋ. ಸ್ವಲ್ಪ ಹೊತ್ತಾದ ನಂತರ ಯಾರೋ ಬಸ್ಸಿನಿಂದ ಇಳಿದಂತಾಯ್ತು.  ಇಳಿದವಳನ್ನು ನೋಡಿ ಅವಾಕ್ಕಾದೆ . ನಾನು ಕಲಿತ ಶಾಲೆಯಲ್ಲೇ ನನ್ನ ಕಸಿನ್ ಓದುತ್ತಿದ್ದಳು . ಅವಳು ಬಸ್ಸಿನಿಂದ ಇಳಿದಂತೆ ಕಿಟಕಿ ಬದಿಯಲ್ಲಿದ್ದ

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. " ಹೆಂಗಸು ೨: "ಏನೋ ಅವ